Content deleted Content added
೩೯ ನೇ ಸಾಲು:
ಹೊಸ ಪದವನ್ನು ಕಲಿಯುವುದು ತಪ್ಪಾ ? ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ. ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ. ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು. ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ? ಹೊಸ ಪದಗಳನ್ನು ಕಲಿಯುವುದು ದೊಡ್ಡತನ. ನೀವೊಬ್ಬರೆ ಅಲ್ಲ ಮಂದಿಯಲ್ಲಿ ಯಾವ ಪದ ಬಳಕೆ ಮಾಡುವುದರ ಬಗ್ಗೆ ತಿಳಿಸುವುದಕ್ಕೆ. ನೀವು ಎರವಲು ಪದಗಳ ಮೊರೆ ಹಿಡಿದು ಕನ್ನಡ ಕೊಲ್ಲುವವರಲ್ಲಿ ಒಬ್ಬರು. ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ. ಆಡನುಡಿಯಿಂದ ದೂರ ಹೋಗುವುದು ಸರಿಯಲ್ಲ.
 
ಆಮೇಲೆ ಬರಿ ತಪ್ಪು/ಸರಿ, ತೊಡಕುಗಳು ಇಂತ ಮಾತುಗಳನ್ನು ಬಿಟ್ಟು ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ. ಕನ್ನಡದಲ್ಲಿ ಹೆಚ್ಚು ಒರೆಗಳಿದ್ದರೆ ಅದು ನಮ್ಮ ನುಡಿಯ ಹಿರಿಮೆ. ಸುಮ್ಮನೆ ಎಲ್ಲಾದಕ್ಕು ಸರಿ/ತಪ್ಪು, ಕುಂದು ಕೊರತೆ ಬರಿ ಇಂತ ಬಲೆಗಳಿಂದ ಹೊರ ಬಂದು ಒಮ್ಮೆ ನೋಡಿ. ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ.<br/>- 116.202.159.211
: ಅನಾಮಧೇಯ ಸದಸ್ಯರೇ, ತಮ್ಮ ಗುರುತನ್ನು ಹೇಳಿಕೊಳ್ಳದೆ ನನ್ನ ಮೇಲೆ ಆರೋಪಹೊರಿಸಿರುವುದರಬಗ್ಗೆ ನಾನು ಉತ್ತರಿಸಬೇಕೆಂದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿಯೇ ಅನಾಮಧೇಯರಾಗಿದ್ದೀರೆಂಬುದು ಸ್ಪಷ್ಟ. ಈ ಕಾರಣದಿಂದಾಗಿ ನಿಮ್ಮ ಸಂದೇಶಕ್ಕೆ ಉತ್ತರಿಸುತ್ತಿದ್ದೇನೆ. <br/>>>ಹೊಸ ಪದವನ್ನು ಕಲಿಯುವುದು ತಪ್ಪಾ ?<br/>- ತಪ್ಪಲ್ಲ. ನೀವು ಕಲಿಯಬೇಡಿಯೆನ್ನಲು ನಾನಾರು?<br/>>>ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ.<br/>- ಒಪ್ಪುತ್ತೇನೆ. ನಾನೂ ಅದನ್ನೇ ಹೇಳುತ್ತಿರುವುದು. ಜನಬಳಕೆಯಲ್ಲಿರುವ ಪದವನ್ನು ಬಳಸೋಣ ಅಂತ.<br/>>>ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ.<br/>- ನನ್ನ ಅರಿವಿನ ಬಗ್ಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ.<br/>>>ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು.<br/>- ನಿಮ್ಮ ಮಂದಿಯೆಂದರೆ ಯಾರು? ಜನಬಳಕೆಯಲ್ಲಿರುವ ಪದಬಳಕೆಯಿಂದ ಜನರು ದೂರ ಹೋಗುವುದಿಲ್ಲ.<br/>>>ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ? <br/>- ಯಾವುದೇ ಹಿಜರಿಕೆ ಇಲ್ಲ. ಅನ್ಯದೇಶೀಯಪದಗಳು ಕನ್ನಡದ್ದಲ್ಲವೆಂದವರು ಯಾರು?<br/>>>ಹೊಸ ಪದಗಳನ್ನು ಕಲಿಯುವುದು ದೊಡ್ಡತನ.<br/>- ಎಲ್ಲಿ ಇಲ್ಲವೆಂದಿದ್ದೇನೆ. ದಾರಾಳವಾಗಿ ದೊಡ್ಡವರಾಗಿ.<br/>>>ನೀವು ಎರವಲು ಪದಗಳ ಮೊರೆ ಹಿಡಿದು '''ಕನ್ನಡ ಕೊಲ್ಲುವವರಲ್ಲಿ ಒಬ್ಬರು.'''<br/>- ಅನಾಮಧೇಯ ಸದಸ್ಯರಾಗಿ ಈರೀತಿ ಆರೋಪಿಸುತ್ತಿರುವುದು ನೋಡಿದರೆ ನಿಮ್ಮ ಬಗ್ಗೆ ನಿಮಗೆ ಅಭಿಮಾನವಾಗಲೀ, ನಂಬಿಕೆಯಾಗಲೀ ಇಲ್ಲವೆಂದು ತೋರುತ್ತಿದೆ. ಉಪಯೋಗಿಸುವ ಪದಗಳ ಬಗ್ಗೆ ಹಿಡಿತವಿರಲಿ. ಇದು ಉತ್ತವ ಚರ್ಚೆಯ ಲಕ್ಷಣವಲ್ಲ<br/>>> ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ.<br/>- ನಾನು ಮಾಡುತ್ತಿರುವುದು ಕನ್ನಡಿಗರಿಗಾಗಿ. ಅವರು ನಿಮ್ಮವರಲ್ಲದಿದ್ದರೆ ನನಗೆ ಅದರ ಬಗ್ಗೆ ಚಿಂತೆಯಿಲ್ಲ<br/>>>ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ. <br/>- ನನ್ನ ಕೆಲಸದ ಬಗ್ಗೆ ವಿರ್ದೇಶಿಸುವ ಯಾವುದೇ ಅಧಿಕಾರ ನಿಮಗಿಲ್ಲ. ತಪ್ಪು/ಸರಿ, ತೊಡಕುಗಳ ಬಗ್ಗೆ ಮಾತಾಡುವುದು ತಪ್ಪಲ್ಲ.<br/>>>ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ<br/>- ಅದನ್ನೇ ನಾನೂ ಹೇಳುತ್ತಿರುವುದು.<br/>-- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೪:೩೯, ೫ ಜೂನ್ ೨೦೧೨ (UTC)
 
==Invite to WikiConference India 2011 ==