ದಿನೇಶ್ ಬಂಗೇರ ಇರ್ವತ್ತೂರು. ಇವರು ಮೂಲತಃ ಕಾರ್ಕಳ ತಾಲೂಕಿನ ಇರ್ವತ್ತೂರಿನವರು. ದಿ. ಸಂಕಪ್ಪ ಮೂಲ್ಯ- ಲಿಂಗಮ್ಮ ಮೂಲ್ಯ ದಂಪತಿಯ ಪುತ್ರರಾಗಿರುವ ಇವರು ಬಿಕಾಮ್ ಪದವೀಧರರು. ಪ್ರಸ್ತುತ ಗಲ್ಫ್ ರಾಷ್ಟ್ರ್ರವಾದ ದೋಹಾ ಕತಾರ್ ನಲ್ಲಿ ಉದ್ಯೋಗದಲ್ಲಿರುವ ಇವರು ಮಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಪತ್ರಕರ್ತರಾಗಿ ದುಡಿದಿದ್ದಾರೆ. ಕನ್ನಡ ಮತ್ತು ತುಳುವಿನಲ್ಲಿ ಲೇಖನ, ಕಥೆ, ಕವನ ಬರೆಯುವ ಹವ್ಯಾಸ ಹೊಂದಿರುವ ಇವರು, ಕುಲಾಲ್ ವರ್ಲ್ಡ್ ಡಾಟ್ ಕಾಮ್ ಎಂಬ ವೆಬ್ ಸೈಟ್ ನ ಸಂಪಾದಕರಾಗಿದ್ದಾರೆ.